Friday 4 January, 2008

ಮಿನಿ ರಾಮಾಯಣ

ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು..
ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ...




ಸೀತೆಯನ್ನು ಹೊತ್ತುಕೊಂಡು ಹೋದ ಲಂಕಾಧಿಪತಿ
ಇದಕ್ಕೆ ಕಾರಣ ಆ ಮಾರೀಚನ ಕಿತಾಪತಿ
ಆಗ ಎಷ್ಟು ನರಳಿದನೋ ಪಾಪ ಸೀತೆಯ ಪತಿ
ಇಷ್ಟಕ್ಕೆಲ್ಲಾ ಕಾರಣ ಸೀತೆಯ ಆಸೆಗಳಿಗಿಲ್ಲದ ಮಿತಿ
ಸೀತೆಯ ಕರೆತರಲು ಹೋದ ಹನುಮಂತ
ಅವನಿಗೆ ಶ್ರೀರಾಮನೇ ಭಗವಂತ
ಲಂಕೆಗೆ ಹೋದ ಹನುಮಂತನಿಂದ ಲಂಕೆ ಸರ್ವನಾಶ
ಲಂಕಾಧಿಪತಿಗೆ ಹಾಕಿದ ಬಿಡಿಸಲಾಗದ ಪಾಶ
ಈ ಜಗತ್ತಿನಲ್ಲಿ ಹೆಚ್ಚಾಗಿದೆ ಮೋಸ
ರಾಮನಿಗೆ ಎಷ್ಟು ಕಷ್ಟದಿಂದ ಕೂಡಿತ್ತೆಂದರೆ ವನವಾಸ
ಅದು ಕಾಯಿಸಿದರೂ ಮುರಿಯಾಲಾಗದ ಕಬ್ಬಿಣ
ಇದುವೇ ರಾಮಸೀತೆಯರ ರಾಮಾಯಣ
-- ಅರುಣ ಸಿರಿಗೆರೆ

No comments: