Wednesday 16 April, 2008

ಸ್ನೇಹ - ಹಣತೆ

ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನತನವ
ಪರರ ಆಸೆಗಳ ಸಾರ್ಥಕತೆಯಲಿ.


ಭ್ರಮಿಸಿ ನಿರಾಶೆಗೊಳ್ಳುವಿಯೇಕೆ?
ತೊಡೆದು ಹಾಕು, ಕವಿದ ಮೋಡಗಳು
ಮಳೆ ಸುರಿಸಬಹುದೆಂಬ ಬಯಕೆ,
ಏಕೆಂದರೆ, ಚದುರುವುದು ಮೋಡಗಳು
ಬೀಸುವ ಗಾಳಿಯ ರಭಸಕೆ.

ಕತ್ತಲೇ ಜಗವೆಂದು ತಿಳಿದ ಮನಕೆ
ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ.
ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ.
ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ,
ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ.

- - ಅರುಣ ಸಿರಿಗೆರೆ

No comments: