Wednesday 16 April, 2008

ತುಡಿತ


ಅಕ್ಕ, ನೆನಪಿದೆಯೇ ನಮ್ಮ ಬಾಲ್ಯದ ದಿನಗಳು?
ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು.
ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ?
ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ
ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು...

ಅಕ್ಕ, ನೆನಪಿದೆಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು,
ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ
ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು
ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ ದೊರಕೀತೆ?

ಅದು ಹಾಗೆಯೇ ಕಾಲದ ಮಹತ್ವ, ಅದರ ಅರಿವು
ನಮಗಾಗುವುದು ಅದು ಗತಿಸಿದ ಮೇಲೆಯೆ..
ಕಳೆದು ಹೋಗುವ ಮೊದಲು ಇಂದಿನ ದಿನವು
ಈ ದಿನದ ಸಂತೋಷವನ್ನೆಲ್ಲಾ ಹೀರಿಬಿಡೋಣ


-- ಅರುಣ ಸಿರಿಗೆರೆ

No comments: